ನೀವು ನೂರಕ್ಕೆ ನೂರು ಈ ಮಾತುಕತೆಯನ್ನು ಕೇಳಿರುತ್ತೀರ, ಅಥವಾ ನೀವೇ ಇದರಲ್ಲಿ ಭಾಗಿಯಾಗಿರುತ್ತೀರ ! ಆ ಮಾತುಕತೆ ಗುಬ್ಬಿಗಳ ಬಗ್ಗೆ ! ಗುಬ್ಬಿ ನಮ್ಮೆಲ್ಲರ ಬಾಲ್ಯದ ಗೆಳೆಯ , ನಾವು ಗುಬ್ಬಿ ಗೂಡುಕಟ್ಟುವುದನ್ನು ಅಲ್ಲಿಲ್ಲಿ ಬಿದ್ದ ಕಾಳುಕಡ್ಡಿ ತಿನ್ನುವುದನ್ನು ನೋಡಿರುತ್ತೇವೆ. ದಸರೆಯ ರಜೆಯಲ್ಲೋ ಬೇಸಿಗೆಯ ಬಿಸಿಲಲ್ಲೋ ಅಮ್ಮ ಅಕ್ಕಿ ನುಚ್ಚು ಒಣಗಿಸಿದರೆ , ಗೋಧಿ ಹರಡಿದರೆ ನಮ್ಮನ್ನು ಕಾಯಲು ಬಿಟ್ಟುಹೋಗುವುದು ವಾಡಿಕೆ ! ಕಾಗೆ ಓಡಿಸುವ ನಾವು, ದನ ಕರು ತಿನ್ನಲು ಬಂದರೆ ಬಿಡದವರು ಒಂದುವೇಳೆ ಗುಬ್ಬಿಗಳು ಬಂದು ತಿಂದರೆ ಸುಮ್ಮನಿರುತ್ತಿದ್ದೆವಲ್ಲ ಯಾಕೆ ? ಅವುಗಳ ಗಾತ್ರನೋಡಿ ಇವು ಇನ್ನೆಷ್ಟು ತಿಂದಾವು ಎಂಬ ಸಹಾನುಭೂತಿಯಾ ? ಅವುಗಳ ಮೇಲಿನ ಪ್ರೀತಿಯಾ ?
" ಈಗಂತೂ ಗುಬ್ಬಿಗಳೇ ಇಲ್ಲ ! ಈ ಮೊಬೈಲು ನೆಟ್ವರ್ಕ್ ರೇಡಿಯೇಶನ್ ನಿಂದ ಎಲ್ಲ ಸತ್ತು ಹೋಗುತ್ತಿವೆ ಸೂಕ್ಷ್ಮ ಜೀವಿಗಳು ನೋಡಿ, ಎಲ್ಲಿ ತಡೆದಾವು ?! ನಮಗೇ ತಲೆನೋವು ಬರುತ್ತದೆ ಇನ್ನು ಪಾಪ ಅವು ಏನುಮಾಡಿಯಾವು !" ಎಂಬುದು ನಮ್ಮೆಲರ ಸರ್ವೇಸಾಮಾನ್ಯ ನಿಲುವು. " ಗಿಜಿಗಿಜಿ ಗುಟ್ಟುವ ಶಹರಗಳಲ್ಲಿ ಗುಬ್ಬಿಗಳಿಗೆಲ್ಲಿದೆ ಜಾಗ ? ಜನಗಳೇ ಗುಬ್ಬಿಗಳಂತೆ ಒಬ್ಬರಮೇಲೊಬ್ಬರು ಒತ್ತರಿಸಿ ಜೀವಿಸುತ್ತಿರುವಾಗ " ! ಆದರೆ ಒಮ್ಮೆ ನಿಮ್ಮ ಶಹರದಿಂದ ಒಂದಷ್ಟು ಕಿಲೋಮೀಟರು ದೂರ ಸಾಗಿ, ಅಗಲವಾಗಿ ಕಣ್ಣು ಬಿಡಿ ! ಅಲ್ಲಲ್ಲಿ ಮರದಪೊಟರೆಯಲ್ಲೋ, ಮನೆಯ ಜಂತೆಯಲ್ಲೋ, ಬೇಲಿಯಲ್ಲೋ ಗುಬ್ಬಿಗಳು ಈಗಲೂ ಗಿಜುಗುಟ್ಟುತ್ತಿರುತ್ತವೆ ! ನೋಡುವ ಧಾವಂತ ಮತ್ತು ವ್ಯವಧಾನ ಬೇಕಷ್ಟೆ !
ಗುಬ್ಬಿಗಳು ವಿಕಿರಣಗಳಿಗಿಂತಾ ಪರಿಪಾಟಲು ಪಡುತ್ತಿರುವುದು ತಂಪನೆರೆವ ಮರಗಳಿಲ್ಲದೆ , ಕುಡಿಯಲು ನೀರಿನ ಹೊಂಡಗಳಿಲ್ಲದೆ , ತಿನ್ನಲು ಕಾಳುಕಡ್ಡಿ ಗಳು ಸಿಗದೆ ! ಅಭಿವೃದ್ದಿಗಾಗಿ ಮರಗಳ ಕಡಿದು , ಕೆರೆ ಹೊಂಡಗಳನು ಆವರಿಸಿಕೊಂಡು ಕಟ್ಟಡಗಳ ಕಟ್ಟುತ್ತಿರುವುದರಿಂದ ! ಬಿಸಿಲು ಹೆಚ್ಚಾಗಿ ಕುಡಿವ ನೀರಿಲ್ಲದೆ ಹಾರುವ ಗುಬ್ಬಿಯ ಎದೆ ನಿಮಿಷಕ್ಕೆ ನಾನೂರ ಐವತ್ತು ಬಾರಿ ಹೊಡೆದುಕೊಳ್ಳುವಾಗ ಗಾಳಿಯಲ್ಲಿನ ಇಂಗಾಲದ ಆಕ್ಸೈಡ್ ಮತ್ತು ಡೈಆಕ್ಸೈಡ್ ಅದರ ಎದೆಹೊಕ್ಕರೆ ಏನಾಗಬೇಡ ???
ಮೊದಲೇ ಸೂಕ್ಷ್ಮ ಜೀವಿ ಪಾಪ !
ಚಿಕ್ಕಂದಿನಲ್ಲಿ ಗುಬ್ಬಿ ಕೈಗೆಸಿಗುವಷ್ಟು ಹತ್ತಿರವಿದ್ದರೂ ನಾವು ಅದನ್ನು ಮುಟ್ಟುತ್ತಿರಲಿಲ್ಲ, ಕಾರಣ " ಗುಬ್ಬಿ ಭ್ರಾಹ್ಮಣ ನಂತೆ ! ಅದನ್ನು ಮನುಷ್ಯರು ಮುಟ್ಟಿದರೆ ಅದರ ಸಂಕುಲಕ್ಕೆ ಹೇಗೋ ಅದು ಗೊತ್ತಾಗಿ ಅದನ್ನು ಸಾಯಿಸಿಬಿಡುತ್ತದೆಂಬ ಸ್ಥಾಪಿತ ( ಒಳ್ಳೆಯದೇ ) ಭಯದಿಂದ " ! ಇದು ನಮ್ಮ ಹಿರಿಯರು ಅವರ ಹಿರಿಯರು ಗುಬ್ಬಿ ಎಂಬ ಸೂಕ್ಷ್ಮ ಜೀವಿಯನ್ನು ರಕ್ಷಿಸಲು ಅನುಸರಿಸುತ್ತಿದ್ದ ಮಾರ್ಗೋಪಾಯ ! ಈ ಹಿರಿಯರೇ ಮರಗಿಡ ನೆಟ್ಟವರು, ಕೆರೆ ಕಟ್ಟೆ ಮಾಡಿದವರು , ಬೇಸಿಗೆಯಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ತಣ್ಣೇರು ಹೊಂಡ ಕೊರೆದು ನೀರು ತುಂಬಿಸಿದವರು, ಅಲ್ಲಲ್ಲಿ ಸುಖಾ ಸುಮ್ಮನೆ ಕಾಳು ಕಡ್ಡಿ ಚಲ್ಲಿದವರು !
ನಾವೋ ಸ್ಟೀಲ್ ಫ್ಲೈಓವರ್ ಗಳಿಗಾಗಿ , ರಸ್ತೆ ಅಗಲೀಕರಣ ಕ್ಕಾಗಿ, ಪಾರ್ಕಿಂಗ್ ಗಾಗಿ ಕೆಲವೊಮ್ಮೆ ಏನೂ ಕಾರಣವಿರದೆ ಸಾವಿರ ಸಾವಿರ ಮರಗಳ ಮುಲಾಜಿಲ್ಲದೆ ಕಡಿವವರು ! ಅವುಗಳ ಸಂಖ್ಯೆ ಕ್ಷೀಣಿಸಹೊರಟಿರುವಾಗ ಅದನ್ನು ವಿಕಿರಣದ ಮೇಲೆ ದೂಡಿ ಸುಮ್ಮನಾಗುತ್ತೇವೆ ! UV ಮತ್ತು IR ವಿಕಿರಣಗಳ್ಳನ್ನು ಸಾವಿರಾರು ವರ್ಷಗಳಿಂದ ಸಹಿಸಿರುವ ಗುಬ್ಬಿಗೆ ಬೇಕಿರುವುದು ಒಂದು ಮರ , ಒಂದಷ್ಟು ಕಾಳು ಕಡ್ಡಿ ಮತ್ತು ಕುಡಿಯಲು ಗುಟುಕು ನೀರು !
ವಿಶೇಷ ಸೂಚನೆ : ನೇತ್ರಾವತಿ ತಿರುವು ಯೋಜನೆಯಡಿಯಲ್ಲಿ ಸರ್ಕಾರ ಸಾವಿರಾರು ಮರಗಳನ್ನು ಕೆಳಗುರುಳಿಸಲು ಸಿದ್ದವಾಗಿರುವ ಬೆನ್ನಲ್ಲೇ ಬೈರಾಪುರ -ಶಿಶಿಲ ರಸ್ತೆಯ ಕೆಲಸ ಶುರುವಾಗಿದೆಯಂತೆ ಇದರಿಂದ ಮೂಡಿಗೆರೆ ಮತ್ತು ಉಜಿರೆಯ ಹಾದಿ ಇಪ್ಪತೊಂಬತ್ತು (೨೯) ಕಿಲೋಮೀಟರು ಕಡಿಮೆಯಾಗಿತ್ತದೆಯಂತೆ ! ಇದು ಪೂರ್ಣವಾಗುವುದರ ಒಳಗೆ ಐವತ್ತು ಸಾವಿರ (೫೦೦೦೦) ಮರಗಳು ಧರೆಗುರುಳುತ್ತವೆ ! ಇಲ್ಲಿ ಸಾಲುಮರದ ತಿಮ್ಮಕ್ಕ ನವರು ಬಿಬಿಸಿ ಯ ವಿಶ್ವದ ೧೦೦ ದಿಟ್ಟ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ ! ನಮ್ಮ ಘನ ಸರ್ಕಾರ ಎರಡನ್ನೂ ಸಮರ್ಥಿಸಿಕೊಂಡು ಹಿಗ್ಗುತ್ತದೆ !
ಒಕ್ಕಲೆಬ್ಬಿಸಿದ ಮನುಷ್ಯನಿಗೆ ಕೆಲವೊಮ್ಮೆ ಸರ್ಕಾರ ಜಮೀನನ್ನೋ, ಮನೆಯನ್ನೋ ಅಥವಾ ಕಾಸನ್ನೋ ಕೊಡುತ್ತದೆ ! ಕೆಳಗೆಬಿದ್ದ ಈ ಮರಗಳಲ್ಲಿ ಆಶ್ರಯ ಪಡೆಯುತ್ತಿದ್ದ ಗುಬ್ಬಿಗಳು ಎಲ್ಲಿಗೆ ಹೋಗುತ್ತವೆ ? ಏನು ಮಾಡುತ್ತವೆ ? ಊರಿಂದ ಓದಿಸಿದಿವಿ ಕಾಡಿಗೆ ಬಂದವು ಈಗ ಕಾಡಿನಿಂದ ???
References
http://timesofindia.indiatimes.com/articleshow/55596266.cms
http://timesofindia.indiatimes.com/city/bengaluru/Saalumarada-Thimmakka-in-BBCs-100-Women-list/articleshow/55573030.cms
http://m.dailyhunt.in/news/india/english/news+karnataka-epaper-newskarn/western+ghats+to+lose+30+000+trees+to+make+way+for+byrapura+shishila+road+project-newsid-60717063
Super .. ಗುಬ್ಬಿಗಳು ಮರ ಜೊತೆ , ಅಂಚಿನ ಮನೆ ಇರುತಿತು ಇವಾಗ ಮರನು ಇಲ್ಲಾ ಅಂಚಿನ ಮನೆ ಇಲ್ಲ.. ಆವಾಗ ಅವಗಳ ಜೊತೆ ಏನೋ ಅವಿನಾಭಾವ ಸಂಭಂದ. ಜೋತೆ ಜೊತೆಯಲ್ಲೇ ಬೆಲಿಯೂತಿದಹೂ .ಹೇಳಬೇಕು ಅಂದ್ರೆ ಗುಬ್ಬೀ ನಮ್ಮಲ್ಲಿ ಒಬ್ಬರಾಗಿತು.
ReplyDeleteActually sparrows require human.... They are not tree nesting birds...an totally depending on humans.... There is no concrete evidence of mobile radiation cause for decline in population.... Other reasons are architectural design of urban building prevents cavities for nesting... Usage of processed foods (cleaned) do not give feeding for birds, packed foods even grains etc. Competition from other feral birds like pigeons etc... And some more reason....
ReplyDeletehttp://swaroopbharadwaj.blogspot.in/2015/03/the-forgotten-friend-house-sparrow.html?m=1
ReplyDelete